Wednesday, June 13, 2007

ಅವರಣದ ಚರ್ಚೆ

Newspaper ನೋಡಿ, ಅವರಣ ಕೃತಿಯ ಬಗ್ಗೆ ಏನಾದರೂ ಇದ್ದೇ ಇರುತ್ತೆ. TV on ಮಾಡಿ ಅಲ್ಲೂ ಕೂಡಾ ಅದರ ಬಗ್ಗೆ ಚರ್ಚೆ.ಸಪ್ನ bookstall ಇತ್ತಿಚಿಗೆ ಸುಮಾರು 2000 ಪ್ರತಿಗಳಿಗೆ Order ಮಾಡಿದೆ ಅನ್ನೋ ಸುದ್ದಿ,ಹತ್ತನೆ ಮುದ್ರಣ ಈ ಕೃತಿಯ ಜನಪ್ರಿಯತೆಯನ್ನು ತೋರಿಸುತ್ತದೆ.ಏನೇ ಅನ್ನಿ ಮೂರ್ತಿಗಳು ಪರೋಕ್ಷವಾಗಿ ಈ ಜನಪ್ರಿಯತೆಯೇಗೆ ಸಾಕ್ಷಿ. ಕನ್ನಡ ಸಾಹಿತ್ಯ ಜಗತ್ತು 'ಅವರಣ ಮಾಯಾ'ವಾಗಿಬಿಟ್ಟಿದೆ. ಗೆಳೆಯ ಪ್ರಸನ್ನ ಕಳಿಸಿರುವ ಸಾಲುಗಳು,

"ಒಂದು ಕೃತಿ ನಮ್ಮ ಧರ್ಮದ ಲೋಪ ದೋಷಗಳನ್ನು ತೋರಿಸಿದಾಗ ಹೋಗಳುವ ನಾವು , ಮತ್ತೊಂದು ಧರ್ಮದ ಲೋಪ ದೋಷಗಳನ್ನು ತೋರಿಸಿದಾಗ ಈ ಭಾವನೆ ಏಕೆ ? ಆವರಣ ಕಾದಂಬರಿ ಓದುಗನಿಗೆ , ನಮಗೆ ಗೊತ್ತಿರದ ಎಷ್ಟೋ ಹೊಸ ವಿಷಯ ತೆರೆದು ಇಡುತ್ತೆ. ಈ ಕೃತಿ ಯಲ್ಲಿ ಬರುವ ವಿಷಯದ ಸತ್ಯ ಅಸತ್ಯ ಚರ್ಚೆ ಮಾಡಲು ತೊಡಗದೆ ನಿಂದನೆ ಮಾಡುವುದು ಎಷ್ಟು ಸರಿ. ಆವರಣ ಕಾದಂಬರಿಯಲ್ಲಿ ಯಾವ ಸತ್ಯ ಇಲ್ಲವೇ ? ಬರಿ ಊಹೆ, ಕಲ್ಪನೆ ಕಾದಂಬರಿಗಳ ಜೊತೆ ಅಂಕಿ ಅಂಶ ಇರುವ ಕಾದಂಬರಿ ಬರೆಯುವ ಬಗೆ ತಪ್ಪೇ. ಈ ತೀರ್ಮಾನ ಕೊಡುವರು ಯಾರು ? ಆವರಣಾವನ್ನು ಒಬ್ಬ ಅನಾಮಿಕ ಬರೆದಿರುವ ಕೃತಿ ಎಂದು ಓದಿ ಅದರ ಚರ್ಚೆ ಮಾಡಿ ನಂತರ ಲೇಖಕನನ್ನು ಸಂವಾದಕ್ಕೆ ಕರೆದು ಚರ್ಚೆ ಮಾಡಲಿ . ಇದಕ್ಕೆ ಮೂರ್ತಿ , ಬೈರಪ್ಪ ನವರು ಸಿದ್ದವ್ವೇ ???"

ನೀವು ಏನಂತೀರಾ???