Saturday, March 28, 2015

ಕಡಲು


ಕಡಲಿನ ಅಲೆಗಳ ಮೊರೆತ
ಮನಸಿನ ವಿಚಾರಗಳ ಭೊರ್ಗರಿತ
ಸಾಗರ ಕಾಣಿಸಿದೆ ಉಲ್ಲಾಸ
ಮನ ತುಂಬಿ ಬಂದಿದೆ ಸಂತಸ

ತುಂಬಿದೆ ಭೂಮಿಯ ಒಡಲು
ನಾ ದೊಡ್ಡವ ಅನ್ನುವ ತೇವಲು
ಸಾಗರದ ಎದರು ನಾವೆಷ್ಟು ಕೇವಲು
ಸ್ಠಿತಿಪ್ರಜ್ಞೆಯಂತೆ ಅನವರತ ಕಡಲು

ಸಿದ್ದಾರ್ಥ ಬುದ್ದನೇಕೆ ಆದ ?
ಅವನಿಗೆ ಬೇಕಿತ್ತೆ ಸಂಸಾರದ ಮೊಕ್ಷ್ಯ ?
ಕಳೆದುಕೊಂಡ ಪರಿವಾರದ ಸಖ್ಯ
ಎಲ್ಲ ಬುದ್ದನಂತರಾದರೆ ಬೆಳೆಯುವದೇ ಜಗತ್ತು?

ಯಾರಾದರೂ ಪಾರಾಗುವುದೇ ಸಂಸಾರದ ಚಿಂತೆ?
ಅನಿಸುವುದು ಇರಬೇಕು ಬಹುಬಲಿಯ ಹಾಗೆ...
ಹಮ್ಮು ಬಿಮ್ಮುಗಳನು ಬಿಸಾಕಿ ಆಚೆ
ನಿರ್ಗವ ಶಾಂತ ಮಂದಸ್ಮಿತನಂತೆ.....

Sunday, February 22, 2015

ಸಿಡ್ನಿ ಮತ್ತು ಮಳೆ

ಸಿಡ್ನಿ ವಲಸೆ ಬಂದೂರು
 ಹೊರಗಡೆ ಬಿಸಿಲು ಜೋರು
 ಮೊದಲ ದಿನಗಳು ಕಡು ಬೋರು
 ಅವಕಾಶದ ಹುಡುಕಾಟದ ಕಾರುಬಾರು  !1!

 ಸೆಂಟ್ರ್ ಲಿಂಕ್,ಬ್ಯಾಂಕ್,ಮೆದಿಕೆರನಲ್ಲಿ ಮೊದಲ ವಾರ
ಸಂಜೆ ಸೀಕ್.ಕಾಮನಲ್ಲಿ ಜಾತಕದ ಪ್ರವರ
 ಯಾರಾದರೂ ಕರೆ ಮಾಡುವವರೇ? ಎಂಬ ಕಾತುರ
 ಮುಗಿದಿದ್ದು ತಿಳಯಲಿಲ್ಲ ಮೊದಲ ವಾರ   !2!

 ಮಗಳು,ಮಡದಿ ಬೆಂಗಳೂರಿಗೆ ಪಯಣ
ಅನಿಸಿತಿಲ್ಲಿ ಮಾಡವದು ಸಂಸಾರ ಕಠಿಣ
ಕೆಲಸದ ಅಲೆದಾಟ ನಿತ್ಯ ನವನವೀನ
ಬ್ರೆಡ್ಡ್ಡು,ಅನ್ನ,ಉಪ್ಪನಿಕಾಯಿಯೇ ನನ್ನ ಜೀವನ   !3!

 ಮಳೆ ಮತ್ತೆ ಬರುತಿದೆ,
 ಹಳೆಯದೆಯಲ್ಲ ನೆನಪಿಸುತಿದೆ
 ಮಳೆಯ ಶಕ್ತಿ ಅಪಾರ
 ಮಗಳ ನೆನಪು ನಿರಂತರ   !4!

 ಇರುವದೆಲ್ಲವ ಬಿಟ್ಟು ಇರದುದಕಡೆ ತುಡಿಯುವದೆ ಜೀವನ
 ಕವಿ ಅಡಿಗರ ಸಾಲು ನಿರಂತರ ಸತ್ಯ
ಹೊಂದಿಕೊಂಡು ಬೇಗ,ಸಂಸಾರ ಕರೆಸುವಲ್ಲಿ ಗಮನ
ತಲುಪುವನೇ ನಾನು ನಿರ್ಧರಿಸಿದ ಗಮ್ಯ???   !5!