Tuesday, January 11, 2011

ನಿಸರ್ಗದ ಮಡಿಲಲ್ಲಿ - ಭಾಗ 3

ದಿನ 4 ಕಾಲೂರನಿಂದ ವನಚಲುವರಗೆ,ಅಜ್ಜಿ ಮೊಟ್ಟೆ ಬೆಟ್ಟದ ಮೂಲಕ.


ಚಾರಣ ಶುರುವಾದದ್ದು ಬೆಳಿಗ್ಗೆ ೯.೦೦.ಈವತ್ತು ನಮ್ಮ ಮೊದಲಿನ ಗೈಡಾದ ರಮೇಶನಿಗೆ ವಿದಾಯ ಹೇಳಿ ,ಹೊಸ ಗೈಡಾದ ಎ.ನಾರಯಣಪ್ಪನ ಜೊತೆ,ಬೆಟ್ಟವನ್ನು ನಿಧಾನವಾಗಿ ಮುನ್ನೆಡೆದವು.ನಡುವೆ ಬರುವ ಅಜ್ಜಿ ಮೊಟ್ಟೆವನ್ನು ಹತ್ತಿ,ಅತ್ಯಂತ ದೂರದಲ್ಲಿ ಕಾಣುವ ಕುಮಾರ ಪರ್ವತವನ್ನು,ಅದರ ಸುತ್ತಲಿನ ಅನೇಕ ಪರ್ವತಗಳನ್ನು,ವಿಶಾಲವಾಗಿ ಕಣಿವೆಗಳಲ್ಲಿ ಹರಡಿರುವ ದಟ್ಟ ಕಾಡನ್ನು ನೋಡಿ ಮುಂದೆ ಸಾಗಿದೆವು.ದಾರಿಯಲ್ಲಿ ಬರುವ 3-4 ಹಳ್ಳ ಹೊಳೆಗಳನ್ನು ದಾಟುವಾಗ ಅಸಂಖ್ಯಾತ ಜಿಗಣೆಗಳ ಕಾಟದಿಂದ ತಪ್ಪಿಸಿಕೊಂಡು ಬೆಟ್ಟದ ಮೇಲೆ ಊಟಕ್ಕೆ ನಿಂತಾಗ ಸಮಯ 1.೦೦.
ಊಟದ ನಂತರ ಸ್ವಲ್ಪ ವಿಶ್ರಮಿಸಿ,ಹಾಗೆ ಮುಂದೆ ನಡೆದಾಗ ,ಒಂದು ಬೆಟ್ಟದ ಮೇಲೆ ದೂರದಲ್ಲಿ 3-4 ಕಾಟಿಗಳನ್ನ್ದ್(ಕಾಡೆಮ್ಮೆ)ಕಂಡವು. ಮುಂದೆ 7 ಕಿ,ಮೀ ನಡೆದು ವನಚಲು ಕ್ಯಾಂಪ್ ತಲುಪಿದಾಗ ಸಮಯ ಸಂಜೆ5.30.ಈಲ್ಲಿ ಅರ್ಧ ಶಾಲೆಯಲ್ಲಿ,ಅರ್ಧ ಟೆಂಟಗಳಲ್ಲಿ ಕ್ಯಾಂಪಗಳಿದ್ದುವು.

ದಿನ 5 ವನಚಲು ಕ್ಯಾಂಪನಿಂದ ಮಡಿಕೇರಿ ಬೆಸ್-ಕ್ಯಾಂಪವರಗೆ ,ನಿಶಾನೆಬೆಟ್ಟದ ಮೂಲಕ

ಈವತ್ತು ಕೊನೆಯ ದಿನದ ಚಾರಣ. ದಿನ ಆಲಸಿಯಾಗಿ ಶುರುವಾಗಿ ಸುಮಾರು 9.15ಕೊನೆಯ ಚಾರಣ ಆರಂಭವಾಯಿತು.ಮೊದಲುನಿಶಾನೆ ಬೆಟ್ಟವನ್ನು ನೋಡಿ,ಅಲ್ಲಿಂದ ಮಡಿಕೇರಿಯಿಂದ ಮಂಗಳೂರಿಗೆ ಹೋಗುವ ಹೆದ್ದಾರಿಯನ್ನು , ಸಂಪಾಜೆ ಗ್ರಾಮವನ್ನು ,ಅದರ ಹಿಂದುಗಡೆ ಹಬ್ಬಿರುವ ಕಾಡನ್ನು ವಿಕ್ಷಿಸಿದೆವು.ಮೊದಲಿನ ಕಾಲದಲ್ಲಿ ನಿಶಾನೆ/ಗುರಿಯನ್ನು ನೋಡಲು ಈ ಬೆಟ್ಟವನ್ನು ಬಳಸುತ್ತಿದ್ದರಿಂದ ಈ ಬೆಟ್ಟಕ್ಕೆ ನಿಶಾನೆಬೆಟ್ಟವೆಂದು ಹೆಸರು. ಇಲ್ಲಿಂದ ಕೆಳಗೆ ಇಳಿಯುತ್ತ ಮಡಿಕೇರಿ ಪಟ್ಟಣದ ರಾಜಾ ಸೀಟ್ ತಲುಪಿದಾಗ ಸಮಯ 3.3೦ ಮತ್ತು ಕ್ರಮಿಸಿದ್ದು 15-16 ಕಿ.ಮೀ.


ಚಾರಣ ತಂಡ 6


ತಂಡ 5ರಲ್ಲಿ 18 ಜನ ಮತ್ತು ತಂಡ 6ರಲ್ಲಿ 13ಜನರನ್ನು ಒಳಗೊಂಡ ಈ ತಂಡದಲ್ಲಿ ದೇಶದ ಎಲ್ಲಾ ಭಾಗಗಳಿಂದ ಎಲ್ಲಾ ವಯೋಮಾನದವರಿದ್ದರು.13ವಯಸ್ಸಿನ ಬೆಂಗಳೂರಿನ ಚಿದು, ಪಿ.ಯು.ಸಿ ಒಡುತ್ತಿರುವ ಅವರಣ್ಣ ಗಗನ,8ಗುಜರಾತಿ ಬೆಹನಗಳು,3-4 ಗುಜ್ಜುಗಳು,ಡೆಲ್ಲಿಯಿಂದ 66 ವರ್ಷದ ಪ್ರಕಾಶ,58 ವರ್ಷದ ಪುರಿ,ನಮ್ಮ ತಂಡದ ನಾಯಕ, ಮಹಾರಾಷ್ಟ್ರದ 5-6 ಯುವಕರು,ಆಂಧ್ರಪ್ರದೇಶದ ಮೂರು ಜನ ಮತ್ತು ಕರ್ನಾಟಕದ 8 ಜನ ರೋಹಿತ್(Fidleity),ಗಗನ,ಚಿದು,ಸಿದ್ದು(mindtech),ಅಜಯ(NDTV)ಮತ್ತು ವಿಜಯ(HP)ರಿದ್ದರು.ಈ ಗ್ರುಪನಲ್ಲಿರುವ ರಾಮದಾಸ ರಾವಂಡೆ ಕತೆ ಕೂತಹಲವಾಗಿದೆ. ವಯಸ್ಸು 63, ಮಹಾರಾಷ್ಟ್ರದ ಜಲಗಾಂವದವರು. ಈಗ ವಿಶ್ರಾಂತ ಜೀವನ.ಈವರಿಗೆ 1998ರಲ್ಲಿ ಪಾರ್ಶ್ವವಾಯುವಾಗಿ,ಕೇವಲ ನೋಟ ಮತ್ತು ಸ್ಪರ್ಶ ಗ್ರಹಿಸಬಲ್ಲವರಾಗಿದ್ದರು.ಬೆಂಗಳೂರಿನ ನಿಮ್ಹಾನ್ಸನಲ್ಲಿ 6ತಿಂಗಳು ಕಾಲ ಚಿಕಿತ್ಸೆಗೆ ಭರ್ತಿಯಾಗಿ ಪಿಜಿಯೊಥೆರಪಿ(Physiotheropy) ಮೂಲಕ ಮೊದಲಿನ ಹಾಗೆ ಒಡಾಡಬಲ್ಲವರಾದರು. ಅವರು ಕೂಡ ಈ ಚಾರಣವನ್ನು ಯಶಸ್ವಿಯಾಗಿ ಮುಗಿಸಿದ್ದನ್ನು ನೋಡಿದರೆ ,ಮನುಷ್ಯ ಮನಸ್ಸು ಮಾಡಿದರೇ,ಎನೆಲ್ಲಾ ಸಾಧಿಸಬಹುದು ಎಂದುದಕ್ಕೆ ಒಳ್ಳೆ ಊದಾಹರಣೆ.


ಈತ ರಮೇಶ H ಮಂದ್ರಾರ.62ವಯಸ್ಸಿನ ಈತ ಕರ್ವಾಲೊ ಕಾದಂಬರಿಯಲ್ಲಿ ಬರುವ ಮಂದಣ್ಣನ ಶಿಷ್ಯನೋ,ಇಲ್ಲಾ ಅವನ ಅಪರಾವತಾರೋ ದೇವರೇ ಬಲ್ಲ. ಈತ ಮೊದಲು 3ದಿನಕ್ಕೆ ಮಾರ್ಗದರ್ಶಕ.ಕನ್ನಡ,ಕೂರ್ಗಿ ಮತ್ತು ತುಳು ಭಾಷೆ ಬಲ್ಲವನಾಗಿದ್ದು ಯಾವಗಲೂ ಕಿವಿಯಿಂದ ಕಿವಿಯವರಗೆ ಹಲ್ಲು ಕಿರಿದುಕೊಂದಿರವನು.ಕಾಡಿನಲ್ಲಿ ಸಕ್ಕರೆ ರೋಗಕ್ಕೆ ಯಾವ ಬಳ್ಳಿ ಕಷಾಯ ಒಳ್ಳೆಯದು,ಯಾವ ಹಣ್ಣು,ಯಾವಾಗ ಬಿಡುವುದು,ಕಾಡಿನಲ್ಲಿರುವ ತರಾವರಿ ಬಳ್ಳಿಗಳು,ಅವುಗಳ ಉಪಯೋಗ,ಪ್ರಸವವಾದ ಹೆಂಗಸರಿಗೆ ಯಾವ ಗಿಡಮೂಲಿಕೆ ಔಷಧಿ ಒಳ್ಳೆಯದು, ಕಾಡು ಅನಾನಸ್ಸುಹಣ್ಣು,ಕಾಡು ಯಾಲಕ್ಕಿ,ಯಾಲಕ್ಕಿ ಬಗೆಗಳು,ರೊಬಸ್ಟಾ ಮತ್ತುಅರೇಬಿಕಾ ಕಾಫಿ ತಳಿಗಳಿಗಿರುವ ವ್ಯತ್ಯಾಸ,ಜೇನು ಸಾಕಣೆ ಪೆಟ್ಟಿಗೆಗಳು,ಹುಲಿ ಜೇನು(ಹೆಜ್ಜೇನು),ಅವುಗಳು ದಾಳಿ ಮಾಡಿದರೆ ತಪ್ಪಿಸಿಕೊಳ್ಳಲಾಗುವದಿಲ್ಲ,ಮುಜಂಟೆ ಜೇನುಗಳು,ಅವುಗಳು ಕೇವಲ ತೆಂಗಿನಮರದ ಹೂವಿನ ಮಕರಂದದಿಂದ ಜೇನು ಮಾಡುವುದು,ಯಾಲಕ್ಕಿ ಬಳ್ಳಿಗಳು,ಮೆಣಸು ಬಳ್ಳಿಗಳು,ಮೆಣಸ್ಸಿಗೆ ಹೂಗಳೀರುವದಿಲ್ಲಾ,ಅವುಗಳಲ್ಲಿ ಬೆಳಿಗ್ಗೆ ಬೀಳುವ ಮಂಜಿನ ಹನಿಯಿಂದ ಪರಾಗಸ್ಪರ್ಶವಾಗಿ,ಮೆಣಸ್ಸಾವುಗುವುದು,ಅದು ನಾವು ನೀವು ಮಾಡುವ ಪರಾಗಸ್ಪರ್ಶದ ತರಾ ಅಲ್ಲಾ ಅನ್ನೊ ಒಗ್ಗರಣೆ ಬೇರೆ,ರಾತ್ರಿ ಶೆಂದಿಗೆ ವ್ಯವಸ್ಠೆ ಮಾಡಬೇಕಾ? "ನಮ್ಮೂರು ಚಂದವೊ,ನಿಮ್ಮೂರು ಚಂದವೊ"ಅನ್ನುವ ಕೆ.ಎಸ್.ಎನ್. ಕವಿತೆ ಹಾಡುತ್ತ ಎಲ್ಲರನ್ನು ನಗಿಸುತ್ತಾ ಮುಂದೆ ಕರೆದೊಯ್ಯುತ್ತಿದ್ದ.
ಮಂಡೆಮುಕ್ರ ಹೇಗೆ ಕೂಗುತ್ತದೆ,ಭೀಮರಾಜ ಪಕ್ಷಿ ಹೇಗೆ ಬೇರೆ ಬೇರೆ ಪಕ್ಷಿಗಳ ,ಮನುಷ್ಯರ ಸಿಳ್ಳೆಯನ್ನು ಅನುಕರಿಸುತ್ತದೆ ಅನ್ನೊದನ್ನ ಕೇಳಿಸಿದ್ದು ರಮೇಶನೇ."ನಾಯಿ ಇದ್ದವನಿಗೆ ಬೇಟೆ,ಬಾಯಿ ಇದ್ದವನಿಗೆ ಬೊಟ್ಟು,"ಕೊಡಗಿನ ಗಾದೆಗಳನ್ನು ಹೇಳುತ್ತ ಚಾರಣ ಹಾದಿ ಸುಲಭಗೊಳಿಸುತ್ತಿದ್ದ.ಎಲಕ್ಕಿ 3ವರ್ಷಗಳ ಹಿಂದೆ ತುಂಬಾ ಬೆಳೆದ್ದಿದ್ದರು,ಆಗ ಬೆಲೆ ಇರಲಿಲ್ಲ,ಈಗ ಸಿಕ್ಕಾಪಟ್ಟೆ ಬೆಲೆ, ಅದಕ್ಕೆ ಕಡಿಮೆ ಬೆಲೆಗೆ ಸಿಗ್ತಾ ಇಲ್ಲಾ,ಮರ ಅಣಬೆ,ತೋಟದಲ್ಲಿ ಕೆಲಸಗಾರರ ಸಮಸ್ಯೆ,ಇಲ್ಲಿರುವರೆಲ್ಲಾ ಬೆಂಗಳೂರು ಇಲ್ಲಾ ಮೈಸೂರು ಸೇರಿ ಹೋಟಲ್ಲೊ,ಬಾರನಲ್ಲಿ ಸ್ಯೆಕುರಿಟಿಗಾರ್ಡಗಳಾಗಿ ಸೇರಿ,ಒಂದು ಕೈಯಲ್ಲಿ ಗನ್ನು,ಇನ್ನೊಂದು ಕೈಯಲ್ಲಿ ******* ಹಿಡದುಕೊಂಡು ಕೆಲಸ ಮಾಡ್ತಾ ಇದಾರೆ ಅನ್ನೊ ವಿಷಯಗಳು ತಿಳಿದುಬಂದುದ್ದು ಈತನಿಂದ.
ಮೊದಲಿನೇ ಬಾರಿ 31ಜನಕ್ಕೆ ಮಾರ್ಗದರ್ಶಕನಾಗಿ ಮತ್ತು ಗುಂಪಿನಲ್ಲಿರುವ ಅರ್ಧ ಜನಕ್ಕೆ ಕನ್ನಡ ಬರುತ್ತಿರವಾದರಿಂದ ಗೊಪಿನಲ್ಲಿರುವ ಜನಕ್ಕೂ ಈತನಿಗೂ ಜಗಳ,ವಾದ-ವಿವಾದ ,Idiotಅನ್ನೊ ಬೈಗುಳಗಳು,ಅದರೂ ಅದೆನ್ನೆಲ್ಲಾ ಲೆಕ್ಕಕ್ಕೆ ತಗೆದುಕೊಳ್ಳದೇ,ಯಾವಗಲೂ ನಗುತ್ತ ಮುಂದೆ ಬನ್ನಿ,ಕಮ್ ಪಾಸ್ಟ್(come fast)ಅನ್ನುತ್ತ ,ಹಲ್ಲಿ ಚಿಲುಯುತ್ತಾ ಮಜಾ ಮಾಡುತ್ತ ನಮಗೆ ಜೊತೆ ನೀಡಿದ.
ಕೊನೆಯದಾಗಿದುಡ್ಡು ಕೊಟ್ಟು ಗುಡ್ಡ ಸುತ್ತೊಕೊ ಯಾಕೆ ಹೋಗತಿಯಾ? ಏನು ಸಿಗುತ್ತೆ ಅನ್ನೋವರಿಗೆ ಹೇಗೆ ಊತ್ತರಿಸುವುದು ತಿಳಿಯದು.5-6 ದಿನ ನಿಸರ್ಗದ ಮಡಲಲ್ಲಿ,ಎಲ್ಲಾ ಮರೆತು,ಚಾರಣ ಮಾಡುವದು ಒಂದು ವಿಶಿಷ್ಟ ಅನುಭವ. ಬೆಳಿಗ್ಗೆ ಎದ್ದು,ಸುಮ್ಮನೆ ಕಾಡು ಸುತ್ತಿ,ಹಣ್ಣಾಗಿ ಹಸಿದು ಕ್ಯಾಂಪಗೆ ಬಂದು ಬೀಳುವುದು ಒಂದು ಮರೆಯಲಾರದ ಅನುಭವ. ಕಡೇಪಕ್ಷ ನಮಗೆ ನೋಡಲು ಕಾಡು, ಕೊಂಚ ಪ್ರಾಣಿಗಳು,ಪಕ್ಷಿಗಳಿರುವುದು ನಮ್ಮ ಸುದೈವ,ಮುಂದಿನ ಪೀಳಿಗೆಗೆ ಇವೆಲ್ಲಾ ಇರುವದಿಲ್ಲ ಅನ್ನೊದು ದುರ್ದೈವ :(-.

ಯುತ್ ಹಾಸ್ಟೆಲ್ ಅಸ್ಸೊಸಿಯನ್ ಅಪ್ ಇಂಡಿಯಾ (Youth Hostel Assocation of India)

ವರ್ಷದ ಕೊನೆಯಲ್ಲಿ ಮತ್ತು ಎಪ್ರಿಲ್ ಮತ್ತು ಮೇನಲ್ಲಿ ದೇಶದ ವಿವಿಧ ಭಾಗಗಗಲ್ಲಿ YHAI ಚಾರಣ ಎರ್ಪಡಿಸುತ್ತಾರೆ.ಆಸಕ್ತರು http://www.yhaindia.org/ ಲಿಂಕನಲ್ಲಿ ಹೆಚ್ಚಿನ ಮಾಹಿತಿ ನೋಡಬಹುದು.
YHAI ಕರ್ನಾಟಕದವರು ಕೊಡಗನಲ್ಲಿ ಕಳಿದ 8ವರ್ಷಗಳಿಂದ ಚಾರಣ ಎರ್ಪಡಿಸುತ್ತಾರೆ.6-7 ಚಾರಣಕ್ಕೆ ಪೂರ್ತಿ ತಂಡ ಅಪಾರ ಶ್ರಮ, ತಾಳ್ಮೆ,ಅರ್ಪಣಾ ಮನೊಭಾವ,ಚಾರಣದ ದಾರಿಗಳನ್ನು ನಿರ್ಧರಿಸುತ್ತಾರೆ. ಈ ಪೂರ್ತಿ ಚಾರಣವನ್ನು ಅತ್ಯಂತ ಯಶಸ್ವಿಯಾಗಿ ನಡೆಸಿಕೊಂಡು ಹೋಗುತ್ತಿರುವ ಧಾರವಾಡದ YHAI ಡಾಕ್ಟರ್ ಸತೀಶ ಕನ್ನಯ್ಯ,ಬೆಂಗಳೂರಿನ ಶ್ರೀರಂಗಯ್ಯ, ಕ್ಯಾಂಪ ಲೀಡರಗಳಾದ ಅನ್ನಪೂರ್ಣಮ್ಮ, ಅಂಬಿಕಾ, ಅಭಿಷೇಕ,ಹಿರೇಮಠ, ಕೊಡಗು ಯುತ್ ಹಾಸ್ಟೆಲ ಸಿಬ್ಬಂದಿಗಳು ಮತ್ತು ರುಚಿಕಟ್ಟಾಗಿ ಅಡುಗೆ ಬಡಸಿದ ಅಡುಗೆಯವರಿಗೆ ನಮ್ಮೆಲ್ಲರ ಅನಂತ ನಮನಗಳು.

ಮುಗಿಯಿತು.....

10 comments:

Vinay said...

good article.. adru more than testing u r doing other activities like shares, FB, blog :) wats up so much less work.

sunaath said...

ಲೇಖನ ಇಷ್ಟವಾಯಿತು.

Unknown said...

I must say its articulated very well and indeed brought back my trekking memories, especially Ramesh.

Pataragitti (ಪಾತರಗಿತ್ತಿ) said...

ಮಹಾಂತೇಶ್,

ಓದಿಸಿಕೊಂಡು ಹೊಯ್ತು ಪ್ರವಾಸಗಥೆ.
ತೇಜಸ್ವಿ ಕಾದಂಬರಿಗಳು ನಿನ್ನ ಮೇಲೆ ಬಹಳ ಪ್ರಭಾವ ಬೀರಿರುವ ಹಾಗಿದೆ :)

ವಂದನೆಗಳು ಚಾರಣಕ್ಕೆ ಕರೆದುಕೊಂಡು ಹೋಗಿದ್ದಕ್ಕೆ.

Mahantesh said...

ಲೇ ,ಅಲಾಸಿ,
ಡಿಸೆಂಬರ್ ಎಂಡ್... ಅದಕ್ಕ ಕೆಲ್ಸಾ ಕಮ್ಮಿ...ಹೆಂಗದ್ದರೂ ರಜಾ ಎಲ್ಲಾ ಖಾಲಿ ಮಾಡಬೇಕು ಇಲ್ಲಾ ಅಂದ್ರ ಲಾಸ್ಸು...ಅದಕ್ಕ ಟ್ರೆಕ್ಕು.

Mahantesh said...

ಸುನಾಥ ಕಾಕಾ,

ಪ್ರತಿಕ್ರಿಯೆಗೆ ಧನ್ಯವಾದಗಳು....

Mahantesh said...

Tanuja,

Thanks for your feebback...Indeen Ramesh was person to remember on that trekk.

Mahantesh said...

ಶಿವ,

ಪ್ರತಿಕ್ರಿಯೆಗೆ ಧನ್ಯವಾದಗಳು....

ಪ್ರೇರಣೆ ಮತ್ತು ಅರ್ಪಣೆ - ಪೂರ್ಣಚಂದ್ರ ತೇಜಸ್ವಿಯವರಿಗೆ.

ಅದನ್ನ ನಾನು ಮೊದಲಿನ ಭಾಗದಲ್ಲಿ ಹೇಳಿದ್ದೇನೆ.:)-

K Purushotham said...

Dear Mahantesh Mahantesh

Thanks for the forwarded blog on our State programme. A note on the day-today development gives the running commentary of your group, the explanations of the guide, the senior participant etc.

Have a nice trekking in the days to come

K Purushotham
Karnataka State Chairman

Mahantesh said...

K Purushotham,

thanks for yourfeed. I looking forword for more trekk from K'nata
Youth Hostel Unit.