Monday, November 12, 2018

ಬೈಲಹೊಂಗಲವೆಂದರೇ.......................

ಬೈಲಹೊಂಗಲವೆಂದರೇ,ನಮ್ಮ ಅಜ್ಜನ ಊರು, ನಮ್ಮ ಅವ್ವನ ತವರುಮನೆ ,ನಾನು ಚಿಕ್ಕವನಿರುವಾಗ ಹೋಗುತ್ತಿದ್ದ ರಾಜ ದಿನದ ಮೋಜಿನ ಊರು, ನಮ್ಮ ಮಾವಂದಿರ ಮದುವೆಗಳು,ಶಿಸ್ತಿನ ವಕೀಲ ಮಾವ,ಎಲ್ಲದಕ್ಕೂ ಬೆಂಬಲ ಮತ್ತು  ಪ್ರೋತ್ಸಾಹ ಕೊಟ್ಟ ಮಹಾಂತೇಶ  ಮಾವ.
              ಬೈಲಹೊಂಗಲವೆಂದರೇ, ಕಲ್ಮಠ ಗಲ್ಲಿ,ಚನ್ನಮ್ಮ ಸಮಾಧಿ,ರಾಣಿ ಚೆನ್ನಮ್ಮ ಇಟ್ಟಿದ್ದ  ಹಳೆ ಜೈಲು,ಹಾಲು ಬಿದ್ದಿರುವ ಕಲ್ಮಠ ಬಾಂವಿ,ಮೂರು ಸಾವಿರದ ಮಠದ ಗಂಗಾಧರ ಸ್ವಾಮಿಗಳು ,ಗಂಡು ಮೆಟ್ಟ್ಟಿದ ನಾಡು ,ಸಂಗೊಳ್ಳಿ ರಾಯಣ್ಣ ಕೂಟ,ಗೊಂಬಿ ಗುಡಿ,ಶುಕ್ರವಾರದ ಸಂತೆ,"ಲೇ ಮಾವ " ,ಎನ್ನುವ ಪ್ರೀತಿಯ ಕರೆ,"ನಿನ್ನ ಹಿರಾ....." ಎನ್ನುವ ಸಾಮಾನ್ಯ ಬೈಗುಳ.
                  ಬೈಲಹೊಂಗಲವೆಂದರೇ, ಎಂ.ಜೆ. ಹೈಸ್ಕೂಲ,ಆ ಸ್ಕೂಲನ ಮೈದಾನದಲ್ಲಿ ಬೊಂಗಾಳೆ ಹುಡಗರ ಜೊತೆ ಆಡಿದ ಕ್ರಿಕೆಟ್ ಮ್ಯಾಚುಗಳು,ಜವಳಿಕೂಟ ,ಮಡ್ಡಿ ಬಸವಣ್ಣ ಜಾತ್ರಿ,ಡಮ್ಮನಗಿ,ಮಾಳೋದೆ ,ಬಾಗೇವಾಡಿ ಅವರ ಅಂಗಡಿಗಳು,ಸಂಗಮ ಕ್ಯಾಂಟೀನಿನ ಮಿರ್ಚಿ ಬಜಿ,ಅಶ್ವಿನಿ ಟೀ ಬಾರನ ಪುರಿ ಬಾಜಿ ಮತ್ತು ಚಾ, ನಮ್ಮ ಅಜ್ಜನ ಎಲ್ಲಾ ಮಕ್ಕಳ ಮದುವೆಗಳಾದ ಪುಣ್ಯಕ್ಷೇತ್ರ ಮೌನೇಶ್ವರ ಗುಡಿ,ಶನಿವಾರಕೊಮ್ಮೆ ಭೇಟಿ ಕೊಡುತ್ತಿದ್ದ ಹನುಮಂತ ದೇವರ ಗುಡಿ, ಅದರ ಹಿಂದಿನ ಕೇರಿ,ತಾಲೂಕ ಗ್ರಂಥಾಲಯ,ಬೆಳಗಾವಿ ರೋಡು.
                     ಸಣ್ಣನಿರುವಾಗ ಆದ ಮಾವನ ಜೊತೆ ಆದ ಚರ್ಚೆಗಳು,ನಮ್ಮ ಅಜ್ಜನ ಮುನ್ನವಳ್ಳಿಯ ಮತ್ತು ಗದಗದ ಹೋರಾಟದ ಬದುಕು,ಅವನಿಗೆ ಬದುಕು ಕಟ್ಟಿಕೊಟ್ಟ ಬೈಲಹೊಂಗಲ,ಚಿಕ್ಕೊಪ್ಪದ ಅವನ ಹೊಲಗಳು,ನಮ್ಮ ಅಜ್ಜಿಯ ಕಾಶವ್ವನ ಹೆಸರು ಬೇಳೆಯ "ದ್ವಾಸಿ", ದಿನ ಬೆಳಿಗ್ಗೆ ಸೈಕಲ್ ಮೇಲೆ ಬರುತ್ತಿದ ಕರಿಕೊಪ್ಪದ ಅಜ್ಜ,ಸಂಜೆ ತಪ್ಪದೇ ಬರುತ್ತಿದ್ದ ತಟವಟಿ ಅಜ್ಜ ಎಲ್ಲವೂ ನೆನಪಿಗೆ ಬರುವವು.
  ಚಿಕ್ಕವನಿರುವಾಗ ನಾನು ಸೈಕಲನಲ್ಲಿ ಗುದ್ದಿ ತೆಲೆ ಓಡಿಸಿಕೊಂಡ ಹುಡುಗ,ಪೊಲೀಸನಾಗಿದ್ದ ಅವರಪ್ಪ ನನ್ನ ಸೈಕಲ್ ಕಸಿದುಕೊಂಡದ್ದು,ನಾನು ಹುಟ್ಟಿದ ಸರಕಾರಿ ದವಾಖಾನೆ,ಹಣಮಂತಗಡ ಹಾಸ್ಪಿಟಲ, ೫ ರೂಪಾಯಿಗೆ ನೋಡುತ್ತಿದ್ದ ಖಾಸನೀಶ ಡಾಕ್ಟರು .
          ಬೈಲಹೊಂಗಲವೆಂದರೇ, ನಾನು ಓದಿದ ಮ್ಯಾಗಿನ ಕಾಲೇಜು,ಕಾಲೇಜು ಪಾಸ್ಸು,ಆರ್ಡಿನರಿ ಬಸ್ಸಿನ ತುಂಬಕೊಂಡಿರುವ ಹುಡುಗ-ಹುಡುಗಿಯರು.physicನ ಪಾಟೀಲ ,ರೇವಣಕರ್ ,ಕೆಮೆಸ್ಟ್ರಿಯ ಶರಣಪ್ಪವನರ,ಸರೂರ್,ಪಟ್ಟಣಶೆಟ್ಟಿ ಗುರುಗಳೆಲ್ಲ ನೆನಪಿಗೆ ಬರುತ್ತಾರೆ.ರೇವಣಕರ ಸರ ಅತ್ಯಂತ ಸರಳವಾಗಿ ವಿವರಿಸಿದ ಅಣುವಿನ ಸಮ್ಮಿಲನ(Fusion) ಮತ್ತು ವಿದಳನ  (Fission) ವಿವರಣೆ,ಲ್ಯಾಬಗಳು,ರವಿವಾರದ N.C.C ಕ್ಲಾಸಗಳು,ಬಾಬು ಜೊತೆ ಹೋಗಿದ್ದ ಹುಲಕೋಟಿಯ national integration camp,ಗಿರೀಶ, ಕಮ್ಮಾರ,ಬಾಬು ಅವರ ಗುಂಪು,ಬೈಕ ವೀರರಾದ ಸಾಲಿಮಠ,ಮಾಳೋದೆ,ಕಿರಣ,ಗದಗ ಮತ್ತೀತ್ತರು.ದೊಡ್ಡಮನಿ ಸರ ಟ್ಯೂಷನ,ಜಗದೀಶ ತಟವಟಿ ಪವಾಡ ಸದ್ರಶವಾಗಿ ಲಾರಿ ಮತ್ತು ಬೈಕ ಅಪಘಾತದಲ್ಲಿ ಪಾರು ಆಗಿದ್ದು,ಹೊಸೂರಿನ ಬಸು ಮತ್ತು ಗೆಳಯರು,ಗಿರೀಶ್ ಮನೆ, ಹಲಸಗಿ ,ಮತ್ತು ದೇಶನೂರ ಸರ ಜೊತೆ ಮಾತುಕತೆಗಳು ನೆನಪಿಗೆ ಬರುತ್ತವೆ.
                          ಕೊನೆಯದಾಗಿ ನನ್ನ ಆಪ್ತ ಮಿತ್ರ ಮಂಜುನಾಥ ಸೂರಿ,ಅವನ ಜೊತೆ ಓದಿದ ಓದು,ಅವನ ಲೂನಾ,ಬಸ್ ನಿಲುಗಡೆ ಹಿಂದುಗಡೆ ಇರುವ ಬಾಗವಾನ್ ಚಾಲನಲ್ಲಿದ್ದ ಅವರ ಮನೆ ನೆನೆಪಿಗೆ ಬಂದು ಮನಸ್ಸು ಭಾರವಾಗುತ್ತದೆ. ಬೈಲಹೊಂಗಲನಲ್ಲಿ ಓದು ಮುಗಿಸಿ ನಿಡಸೋಸಿನಲ್ಲಿ ಎಂಜಿನಿಯರ ಓದಿ,ಪುಣೆಯಲ್ಲಿ ಸುಮಾರು ವರ್ಷ ಕೆಲಸ ಮಾಡಿ,ಬೆಂಗಳೂರಿಗೆ ಬಂದಿದ್ದ ಮಂಜು ಜೊತೆ ನೋಡಿದ ನಾಲ್ಕಾರು ನಾಟಕಗಳು,ಸಿನೆಮಾಗಳು ವಿಷಾದದ ಛಾಯೆ ಬರುತ್ತದೆ.ಆ ದಿನಗಳಲ್ಲಿ ನಿಶ್ಚಿತಾಥವಾಗಿದ್ದ ಅವನ  ಅಪೇಂಡಿಸ್ಕ ಬರ್ಸ್ಟ್(apendix burst) ಆಗಿ ಮಣಿಪಾಲನಲ್ಲಿ ಅಡ್ಮಿಟ್ ಮಾಡಿದ್ದು,ಉದಯ ತುಂಬಾ ಓಡಾಡಿದ್ದು,blood transfusion) ಮಾಡಿ ಕೂಡ ಉಳಿಯಲಾರದ.
                                       ಅತಿ ಚಿಕ್ಕ ವಯಸ್ಸಿನಲ್ಲಿ(೨೯) ಬದುಕಿಗೆ ವಿದಾಯ ಹೇಳಿದ ಮಂಜು,ಅವನ ತಾಯಿ,ಈಶ್ವರ,ಆದಾಯ ಮಾಳೋದೆ ಜೊತೆ ಅತಿ ಜೋರಾಗಿ ದುಃಖ ತೋಡಿಕೊಂಡಿದ್ದು,ಅವನ ಸಹೋದರರ ಮತ್ತೆ ತಂದೆ ಹತಾಶ ನೋಟ ನೆನಪಿಗೆ ಬಂದು ಹೃದಯ ಭಾರವಾಗುತ್ತದೆ.

(ಪ್ರೇರಣೆ: ಜಯಂತ ಕಾಯ್ಕಣಿ ಅವರ ಆಂಕೋಲೆಂದರೆ ಲೇಖನ )



1 comment:

sunaath said...

ಹೌದರಿ, ಮಹಾಂತೇಶ, ಊರು ಒಳಗs ಇರ್ತದ; ಹೊರಗಲ್ಲ. ಬೈಲಹೊಂಗಲಕ್ಕ ನಾ ಒಂದs ಒಂದ ಸಲಾ ಬಂದಿದ್ದೆ, ಎರಡ ತಾಸಿನ ಮಟ್ಟಿಗೆ. ಆದರ ಬೈಲಹೊಂಗಲದಾಗ ಚೆನ್ನಮ್ಮನ ಸಮಾಧಿ ಅದ ಅನ್ನೋ ಒಂದs ಕಾರಣಕ್ಕ ಬೈಲಹೊಂಗಲ ನನಗ ಪ್ರಿಯವಾದ ಊರಾಗೇದ. ಚೆನ್ನಾಗಿ ಬರದೀರಿ.